೧೭ ನೇ ಶತಮಾನದ ತೆಲುಗು ಪಠ್ಯ ರಾಯವಾಚಕಮು, ಮತ್ತು ನಂತರದ ಕಾವ್ಯಾತ್ಮಕ ನಿರೂಪಣೆ ಕೃಷ್ಣರಾಜವಿಜಯಂ ಗ್ರಂಥಗಳಲ್ಲಿ ಪೆಮ್ಮಸಾನಿ ರಾಮಲಿಂಗ ನಾಯುಡು ಅವರನ್ನು ವಿಜಯನಗರ ಚಕ್ರವರ್ತಿ ಕೃಷ್ಣದೇವರಾಯನ ಸೇನಾನಾಯಕ ಮತ್ತು 'ಸೇನಾಧಿಪತಿ' ಎಂದು ಹೆಸರಿಸಲಾಗಿದೆ (ಕ್ರಿ.ಶ. ೧೫೦೯-೧೫೨೯) ಅವರು ಸುಮಾರು ೮0,000 ಸೈನಿಕರನ್ನು ಒಳಗೊಂಡ ವಿಜಯನಗರ ಸೇನಾ ಘಟಕದ ಸೇನಾ ಕಮಾಂಡರ್ ಆಗಿದ್ದರು. ಕ್ರಿ.ಶ. ೧೫೪೪ ರ ಕಾಲದ ಶಾಸನವು ತಲ್ಲಪ್ರೊಡ್ಡಾಟುವಿನಲ್ಲಿ ಕಂಡುಬಂದಿದ್ದು, ಪೆಮ್ಮಸಾನಿ ರಾಮಲಿಂಗನು ಗ್ರಾಮದ ನಾಯಂಕರ (ಊಳಿಗಮಾನ್ಯ ನಿಯಂತ್ರಣ) ಸ್ಥಾನವನ್ನು ಅನುಭವಿಸುತ್ತಿದ್ದನೆಂದು ಹೇಳುತ್ತದೆ. ರಾಯವಾಚಕಮು ಪ್ರಕಾರ, ಅವನು ವಿಜಯನಗರದ ರಾಜ ಕೃಷ್ಣದೇವರಾಯನ ತುರ್ಕಿಯರೊಂದಿಗಿನ ಯುದ್ಧದಲ್ಲಿ ಕಮಾಂಡರ್ ಆಗಿದ್ದನು. ಇತಿಹಾಸಕಾರ ವೆಂಕಟರಮಣಯ್ಯ ಅವರು ಈ ಯುದ್ಧವನ್ನು ೧೫೦೯-೧೫೧೦ ರಲ್ಲಿ, ಕೃಷ್ಣದೇವರಾಯನ ಪ್ರವೇಶದ ಒಂದು ವರ್ಷದೊಳಗೆ ದೇವ್ನಿ ಅಥವಾ ದೇವನಿಯಲ್ಲಿ ನಡೆದ ಯುದ್ಧ ಎಂದು ಗುರುತಿಸಿದ್ದಾರೆ. ಆದರೆ ನಿರೂಪಣೆಯ ಕೆಲವು ಅಂಶಗಳು ರಾಯಚೂರು ಕದನವನ್ನು ಸಹ ನೆನಪಿಸುತ್ತವೆ. ಕೃಷ್ಣದೇವರಾಯನಿಗಾಗಿ ಕಲ್ಬುರ್ಗಿ, ಗೋಲ್ಕೊಂಡ ಮತ್ತು ಅಹಮದ್‌ನಗರದ ಸಂಯೋಜಿತ ಸೇನೆಗಳ ವಿರುದ್ಧದ ಯುದ್ಧವನ್ನು ಗೆಲ್ಲುವಲ್ಲಿ ರಾಮಲಿಂಗ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾನೆ ಎಂದು ಹೇಳಲಾಗುತ್ತದೆ. ಈ ವಿಜಯದ ನಂತರ ಕೃಷ್ಣದೇವರಾಯ ಅವರಿಗೆ ಚಿನ್ನದ ದಾರದ ಬಟ್ಟೆ ಮತ್ತು ಆಭರಣಗಳನ್ನು ನೀಡಿ ಗೌರವಿಸಿದರು. ಇವರು ಪೆಮ್ಮಸಾನಿ ತಿಮ್ಮನಾಯುಡು ಮತ್ತು ಮಾಚಮ್ಮ ದಂಪತಿಗಳ ಪುತ್ರ. ಪೆಮ್ಮಸಾನಿ ನಾಯಕರು ಸಮರ ಕುಲದವರು. ವಿಜಯನಗರ ಸಾಮ್ರಾಜ್ಯದ ಅರವೀಡು ರಾಜವಂಶದ ಅವಧಿಯಲ್ಲಿ, ಪೆಮ್ಮಸಾನಿಗಳು ವಿಜಯನಗರದ ಆಸ್ಥಾನದಲ್ಲಿ ಗಂಡಿಕೋಟ ಸೀಮೆಯ ಮುಖ್ಯಸ್ಥರು ಮತ್ತು ಮಂತ್ರಿಗಳಾಗಿ ಪ್ರಾಮುಖ್ಯತೆಯನ್ನು ಹೊಂದಿದ್ದರು. ಪೆಮ್ಮಸಾನಿಗಳು ಹಲವಾರು ಸಣ್ಣ ಹಳ್ಳಿಗಳು ಮತ್ತು ಅನೇಕ ದೊಡ್ಡ ಪಟ್ಟಣಗಳನ್ನು ನಿಯಂತ್ರಿಸುತ್ತಿದ್ದರು ಮತ್ತು ಹದಿನಾರನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಮುಂಚೂಣಿಯಲ್ಲಿದ್ದ ದೊಡ್ಡ ಕೂಲಿ ಸೈನ್ಯವನ್ನು ಹೊಂದಿದ್ದರು ಎಂದು ಬರ್ಟನ್ ಸ್ಟೈನ್ ಹೇಳುತ್ತಾರೆ. ರಾಮಲಿಂಗ ಮತ್ತು ಅವರ ಸಹೋದರ ಎರ್ರಾ ತಿಮ್ಮನಾಯುಡು ಅಳಿಯ ರಾಮರಾಯ ಅವರಿಗಾಗಿ ಜೂಟುರು ಕದನ, ಬೇತಂಚೆರ್ಲಾ ಕದನ, ಬೇಡಕಲ್ಲು ಕದನ, ಆದೋನಿ ಕದನ ಸೇರಿದಂತೆ ವಿವಿಧ ಯುದ್ಧಗಳನ್ನು ಮಾಡಿ ಗೆದ್ದರು. ಅಚ್ಯುತ ದೇವರಾಯನ ಮರಣದ ನಂತರದ ಉತ್ತರಾಧಿಕಾರದ ಸಂಘರ್ಷದಲ್ಲಿ ಸಲಕರಾಜು ತಿರುಮಲ ವಿರುದ್ಧ ರಾಮರಾಯನು ಗೆದ್ದದ್ದು ಮುಖ್ಯವಾಗಿ ಅವರ ಸಹಕಾರದಿಂದ. == ಇವನ್ನೂ ನೋಡಿ == ರಾಯಚೂರು ಕದನ == ಗ್ರಂಥಸೂಚಿ == , (1989), : , , 978-0-521-26693-2 , . (1964), " ", , 30, 1-4, , . 89–104 , . (1973), " " (), 1336 1650 , / , . (1993), : Rāyavācakamu, , 978-0-8248-1495-3 == ಉಲ್ಲೇಖ ==